---Advertisement---

House Build Subsidy: ಗ್ರಾಮೀಣ ಪ್ರದೇಶದ ಜನರಿಗೆ ಹೊಸ ಮನೆ ಕಟ್ಟಲು 2.5 ಲಕ್ಷ ರೂಪಾಯಿ ಸಹಾಯಧನ !

On: December 12, 2025 3:16 PM
Follow Us:
House Build Subsidy

Join WhatsApp

Join Now

Join Telegram

Join Now

ಕರ್ನಾಟಕದ ಸಾವಿರಾರು ಕುಟುಂಬಗಳು ಇಂದಿಗೂ ಸುರಕ್ಷಿತ ಮನೆ ಮತ್ತು ಸ್ಥಿರ ಜೀವನದ ಕನಸನ್ನು ಕಾಣುತ್ತಿವೆ. ಈ ಕನಸಿಗೆ ಹೊಸ ಜೀವ ತುಂಬಲು ರಾಜ್ಯ ಸರ್ಕಾರವು ರಾಜೀವ್ ಗಾಂಧಿ ಗ್ರಾಮೀಣ ವಸತಿ ಯೋಜನೆಯ ಮೂಲಕ ಮನೆ ನಿರ್ಮಾಣಕ್ಕೆ ಸಹಾಯಧನ ನೀಡಲು ಆರಂಭಿಸಿದೆ. ಈಗ, ಅರ್ಹ ಫಲಾನುಭವಿಗಳು ಹೊಸ ಮನೆ ನಿರ್ಮಾಣಕ್ಕೆ ಸರ್ಕಾರದಿಂದಲೇ ರೂ.2.5 ಲಕ್ಷ ವರೆಗಿನ ಸಹಾಯಧನ ಪಡೆಯಬಹುದು.

ಈ ಯೋಜನೆಯ ಮೂಲಕ ಈಗಾಗಲೇ ಹಲವಾರು ಮನೆಗಳು (House Build Subsidy) ನಿರ್ಮಾಣಗೊಂಡಿವೆ. ಈ ಯೋಜನೆ ಮೂಲಕ ಹಲವಾರು ಜನರು ತಮ್ಮ ಮೊದಲ ಪಕ್ಕಾ ಮನೆಯನ್ನು ಪಡೆದಿದ್ದಾರೆ ಎಂದು ಹೇಳಿದರೆ ತಪ್ಪಾಗಲಾರದು. ಈ ಯೋಜನೆ ಬಡಜನರ ಜೀವನದಲ್ಲಿ ಶಾಶ್ವತ ಬದಲಾವಣೆಯನ್ನು ತರಲು ರೂಪಿಸಲ್ಪಟ್ಟಿದೆ — ಇದು ಕೇವಲ ವಸತಿ ಯೋಜನೆಯಲ್ಲ, ಜೀವನ ನಿರ್ಮಾಣದ ಒಂದು ಅವಕಾಶವಾಗಿದೆ.

ಈ ಯೋಜನೆಯ ಪ್ರಮುಖ ಉದ್ದೇಶ

ಗೃಹ ನಿರ್ಮಾಣಕ್ಕೆ ಸಹಾಯಧನ ಯೋಜನೆಯ ಮೂಲ ಉದ್ದೇಶ ಬಡಜನರ ಸಾಮಾಜಿಕ ಮತ್ತು ಆರ್ಥಿಕ ಶಕ್ತೀಕರಣಕ್ಕೆ ದಾರಿ ಮಾಡಿಕೊಡುವುದು. ವಸತಿ ಮತ್ತು ಉದ್ಯೋಗದ ಅವಕಾಶಗಳನ್ನು ಒಂದೇ ವೇದಿಕೆಯಲ್ಲಿ ಒದಗಿಸುವ ಮೂಲಕ ಅವರ ಜೀವನಮಟ್ಟವನ್ನು ಉತ್ತೇಜಿಸುವುದು ಆಗಿದೆ. ಯೋಜನೆಯನ್ನು ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮ ನಿಯಮಿತ (RGRHCL) ರಾಜ್ಯದೆಲ್ಲೆಡೆ ಜಾರಿಗೆ ತಂದಿದೆ.

ಸಹಾಯಧನದ ವಿವರಗಳು

ಪ್ರತಿ ಫಲಾನುಭವಿಗೆ ಒಟ್ಟು ರೂ.2,50,000 ರ ಸಹಾಯಧನ ದೊರೆಯಲಿದೆ.
ಸರ್ಕಾರದ ಪಾಲು: ರೂ.2,20,000
ಫಲಾನುಭವಿಯ ಪಾಲು: ರೂ.30,000

ಈ ಮೊತ್ತವನ್ನು ಹೊಸ ಮನೆ ನಿರ್ಮಾಣಕ್ಕೆ ಬಳಸಲಾಗುತ್ತದೆ. ಈ ಮೂಲಕ ಮನೆ ಇಲ್ಲದವರಿಗೆ ಪಕ್ಕಾ ಮನೆ ನಿರ್ಮಿಸಿಕೊಡುವುದು ಈ ಯೋಜನೆಯ ಮೂಲ ಉದ್ದೇಶವಾಗಿದೆ.

ಈ ಯೋಜನೆಗೆ ಯಾರು ಅರ್ಜಿ ಹಾಕಬಹುದು?

  • ಈ ಯೋಜನೆ ಕೇವಲ ಪರಿಶಿಷ್ಟ ಜಾತಿಯ ಚರ್ಮಕಾರ ಕುಶಲಕರ್ಮಿಗಳಿಗೆ ಮಾತ್ರ. ಒಳಗೊಂಡ ಉಪಜಾತಿಗಳು: ಅರುಂಧತಿಯಾರ್, ಚಮಾರ್, ಮಾದಿಗ, ಮೋಚಿಗಾರ್, ಹರಳಯ್ಯ ಮುಂತಾದವರು.
  • ಯೋಜನೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯ ವಯಸ್ಸು 18 ಮೇಲ್ಪಟ್ಟಿರಬೇಕು.
  • ಅರ್ಜಿ ಸಲ್ಲಿಸುವಂತಹ ಅರ್ಜಿದಾರನ ಕುಟುಂಬದ ವಾರ್ಷಿಕ ಆದಾಯವು ಗ್ರಾಮೀಣ ಪ್ರದೇಶದಲ್ಲಿ ಇರುವಂತಹ ಕುಟುಂಬದವರಿಗೆ 32000 ಕ್ಕಿಂತ ಕಡಿಮೆ ಮತ್ತು ನಗರ ಪ್ರದೇಶದಲ್ಲಿರುವವರ ಆದಾಯ ರೂ.87,600 ಕ್ಕಿಂತ ಕಡಿಮೆ ಇರಬೇಕು.
  • ಅರ್ಜಿ ಸಲ್ಲಿಸುವಂತಹ ಅರ್ಜಿದಾರನ ಹೆಸರಿನಲ್ಲಿ ನಿವೇಶನ ಅಥವಾ ಹಳೆಯ ಮನೆ ಇರಬೇಕು.
  • ಅರ್ಜಿದಾರನು ಈ ಹಿಂದೆ ಯಾವುದೇ ಇತರೆ ವಸತಿ ಯೋಜನೆಗಳಲ್ಲಿ ಲಾಭವನ್ನು ಪಡೆದಿರಬಾರದು.
  • ಅರ್ಜಿ ಸಲ್ಲಿಸುತ್ತಿರುವ ಕುಟುಂಬದ ಸದಸ್ಯರಲ್ಲಿ ಯಾರು ಕೂಡ ಸರಕಾರಿ/ಅರೆ ಸರ್ಕಾರಿ ನೌಕರಿ ಮಾಡುತ್ತಿರಬಾರದು.

ಇದನ್ನೂ ಓದಿರಿ: ರೈತರಿಗೆ ಬಂಪರ್ ಕೊಡುಗೆ: ನಮ್ಮ ಹೊಲ ನಮ್ಮ ದಾರಿ ಯೋಜನೆಗೆ ಚಾಲನೆ! ಈಗ ನಿಮ್ಮ ಜಮೀನಿಗೂ ಸಿಗಲಿದೆ ಪಕ್ಕಾ ರಸ್ತೆ ಸಂಪರ್ಕ!

ಅರ್ಜಿ ಸಲ್ಲಿಸಲು ಅಗತ್ಯ ದಾಖಲೆಗಳು

  • ಆಧಾರ್ ಕಾರ್ಡ್
  • ಜಾತಿ ಪ್ರಮಾಣಪತ್ರ
  • ವಾರ್ಷಿಕ ಆದಾಯ ಪ್ರಮಾಣಪತ್ರ
  • ಪಡಿತರ ಚೀಟಿ
  • ಇ-ಶ್ರಮ್ ಕಾರ್ಡ್
  • ನಿವೇಶನ/ಖಾತಾ ಪ್ರಮಾಣಪತ್ರ
  • ಕೌಶಲ್ಯ ಪರೀಕ್ಷಾ ಪ್ರಮಾಣಪತ್ರ
  • ಅರ್ಜಿದಾರನ ಫೋಟೋಗಳು

House Build Subsidy ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?

  • ಈ ಮನೆ ನಿರ್ಮಾಣ ಸಹಾಯಧನ ಯೋಜನೆಗೆ ಅರ್ಜಿಯ ಪ್ರಕ್ರಿಯೆ ಸಂಪೂರ್ಣವಾಗಿ ಆನ್‌ಲೈನ್ ಆಗಿದೆ.
  • ಮೊದಲನೆಯದಾಗಿ ಸೇವಾ ಸಿಂಧು ಪೋರ್ಟಲ್‌ಗೆ ಭೇಟಿ ನೀಡಿ – https://sevasindhu.karnataka.gov.in
  • Departments and Services ಅಡಿಯಲ್ಲಿ Social Welfare Department ಆಯ್ಕೆಮಾಡಿ.
  • Dr. Babu Jagjivan Ram Housing and Workshop Scheme ಆಯ್ಕೆಮಾಡಿ.
  • Apply Online ಕ್ಲಿಕ್ ಮಾಡಿ, OTP ಮೂಲಕ ಲಾಗಿನ್ ಆಗಿ.
  • ವೈಯಕ್ತಿಕ, ಬ್ಯಾಂಕ್ ಮತ್ತು ವಿಳಾಸದ ವಿವರಗಳನ್ನು ನೀಡಿ ಅರ್ಜಿ ಸಲ್ಲಿಸಿ.
  • Application Number ಸೆರೆಹಿಡಿದಿಟ್ಟುಕೊಳ್ಳಿ ಈ ನಂಬರಿನ ಮೂಲಕ ಅರ್ಜಿಯ ಸ್ಥಿತಿ ಟ್ರ್ಯಾಕ್ ಮಾಡಬಹುದು.

ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ಹೇಗಿರಲಿದೆ?

ಜಿಲ್ಲಾ ಸಮನ್ವಯಾಧಿಕಾರಿಗಳು ಅರ್ಜಿಗಳನ್ನು ಪರಿಶೀಲಿಸುತ್ತಾರೆ. ಪ್ರಾಥಮಿಕ ಪಟ್ಟಿಯನ್ನು ಸ್ಥಳೀಯ ಶಾಸಕರ ಶಿಫಾರಸ್ಸಿಗೆ ಕಳುಹಿಸಿ, ನಂತರ ಜಿಲ್ಲಾ ಆಯ್ಕೆ ಸಮಿತಿಯಿಂದ ಅಂತಿಮ ಪಟ್ಟಿ ತಯಾರಿಸಲಾಗುತ್ತದೆ. ಪ್ರಧಾನ ಕಚೇರಿಯಿಂದ ಅನುಮೋದನೆ ಬಂದ ಬಳಿಕ ಪಟ್ಟಿಯನ್ನು ಅಧಿಕೃತವಾಗಿ ಪ್ರಕಟಿಸಲಾಗುತ್ತದೆ. ಸಂಪೂರ್ಣ ಪ್ರಕ್ರಿಯೆ ಪಾರದರ್ಶಕವಾಗಿದ್ದು, ಯಾವುದೇ ರಾಜಕೀಯ ಪ್ರಭಾವ ಇರುವುದಿಲ್ಲ.

Mahesh Kumar M.

ನಾನು 2020 ರಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಸಿಕೊಂಡಿದ್ದೆನೆ. ಸಧ್ಯ gjiet.com ಮೂಲಕ ಓದುಗರಿಗೆ ನಿಖರ, ನೈಜ ಮತ್ತು ಸವಿವರವಾದ ಮಾಹಿತಿಯನ್ನು ತಲುಪಿಸುವ ಪ್ರಯತ್ನ ಮಾಡುತ್ತಿದ್ದೇನೆ. ವಿಶೇಷವಾಗಿ ಉದ್ಯೋಗ ಮತ್ತು ಸರಕಾರಿ ಯೋಜನೆಗಳ ಕುರಿತಾಗಿ ಆಳವಾದ ಅಧ್ಯಯನವನ್ನು ಮಾಡಿದ್ದು, ಓದುಗರಿಗೆ ಉದ್ಯೋಗದ ಮತ್ತು ಸರಕಾರಿ ಯೋಜನೆಗಳ ಮಾಹಿತಿಯನ್ನು ತಲುಪಿಸುವ ಗುರಿಯನ್ನು ಇಟ್ಟುಕೊಂಡಿದ್ದೇನೆ.

Latest Post

Leave a Comment