ರೈತರಿಗೆ ಕೃಷಿ ಕಾರ್ಯ ನಡೆಸಲು ನೀರು ತುಂಬಾ ಅವಶ್ಯಕ. ಕೃಷಿ ಬೆಳೆಗಳಿಗಾಗಿ ನೀರಿನ ವ್ಯವಸ್ಥೆಯೇ ಆರ್ಥಿಕ ಸ್ವಾವಲಂಬನೆಗೆ ಮೊದಲ ಹೆಜ್ಜೆ. ಈ ನಿಟ್ಟಿನಲ್ಲಿ ಕರ್ನಾಟಕದ ಕ್ರಿಶ್ಚಿಯನ್ ಸಮುದಾಯ ಅಭಿವೃದ್ಧಿ ನಿಗಮ ನಿಯಮಿತವು ಗಂಗಾ ಕಲ್ಯಾಣ (Ganga Kalyana) ಯೋಜನೆಯಡಿ ರೈತರಿಗೆ ಕೊಳವೆ ಬಾವಿ ಅಥವಾ ಬೋರ್ವೆಲ್ ಕೊರೆಸಲು ರೂ.4 ಲಕ್ಷದವರೆಗೆ ಸಬ್ಸಿಡಿಯನ್ನು ನೀಡುತ್ತಿದೆ. ಈ ಯೋಜನೆಯಡಿ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದ್ದು, ಇದರಿಂದ ಸಣ್ಣ ಮತ್ತು ಅತೀ ಸಣ್ಣ ರೈತರು ಸಹಾಯಧನ ಪಡೆಯಬಹುದು.
ಗಂಗಾ ಕಲ್ಯಾಣ (Ganga Kalyana) ಯೋಜನೆಯ ಉದ್ದೇಶ ಮತ್ತು ಪ್ರಾಮುಖ್ಯತೆ
ಗಂಗಾ ಕಲ್ಯಾಣ ಯೋಜನೆಯ ಉದ್ದೇಶ ಪ್ರತಿಯೊಬ್ಬ ರೈತರಿಗೆ ತಾವು ಬೆಳೆದ ಬೆಳೆಗಳಿಗೆ ವರ್ಷದ ಮೂರ್ನಾಲ್ಕು ಋತುವಿನಲ್ಲಿ ನೀರು ಲಭ್ಯವಾಗುವಂತಾಗಿಸುವುದು. ಇದರಿಂದ ಕೃಷಿ ಬೆಳೆಯುವವರಿಗೆ ಖುಷ್ಕಿ ಜಮೀನುಗಳ ಮೇಲೆ ನೀರು ದೊರಕುವ ವ್ಯವಸ್ಥೆ ಕಲ್ಪಿಸಿ ಅವರು ಆರ್ಥಿಕವಾಗಿ ಬಲಿಷ್ಠರಾಗಿ ಬೆಳೆಗಳನ್ನು ಬೆಳೆಸಲು ಪ್ರೋತ್ಸಾಹ ನೀಡುವುದು.
ಅರ್ಜಿ ಸಲ್ಲಿಸಲು ಅರ್ಹತಾ ಶರತ್ತುಗಳು
- ಅರ್ಜಿದಾರರು ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು.
- ಅರ್ಜಿ ಸಲ್ಲಿಸುವವರು ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರಾಗಿರಬೇಕು.
- ಕೃಷಿ ಜಮೀನು 1 ಎಕರೆ 20 ಗುಂಟೆಯಿಂದ 5 ಎಕರೆವರೆಗೆ ಹೊಂದಿರಬೇಕು (ಕೊಡಗು, ದಕ್ಷಿಣ ಕನ್ನಡ, ಉಡುಪಿ, ಮತ್ತು ಇತರೆ ಜಿಲ್ಲೆಗಳಲ್ಲಿ ಕನಿಷ್ಠ 1 ಎಕರೆ ಇದ್ದಿರಬೇಕು).
- ಸಣ್ಣ ಮತ್ತು ಅತೀ ಸಣ್ಣ ಹಿಡುವಳಿದಾರ ರೈತರೂ ಅರ್ಜಿ ಸಲ್ಲಿಸಲು ಅರ್ಹ.
- ಗ್ರಾಮೀಣ ಪ್ರದೇಶದಲ್ಲಿ ಅರ್ಜಿದಾರರ ವಾರ್ಷಿಕ ಆದಾಯ ರೂ. 6 ಲಕ್ಷಗಳಿಗಿಂತ ಕಡಿಮೆ ಇರಬೇಕು.
- ಅರ್ಜಿದಾರರ ವಯಸ್ಸು ಕನಿಷ್ಠ 18 ವರ್ಷ.
- ಯಾವುದೇ KMDC/KCCDC ಸಾಲ ಸೌಲಭ್ಯ ಪಡೆದಿರಬಾರದು (ವಿದ್ಯಾಭ್ಯಾಸ ಸಾಲ ಹೊರತುಪಡಿಸಿ).
- ಕಂದಾಯ ಇಲಾಖೆಯಿಂದ ಕೊಳವೆ ಬಾವಿ ಇಲ್ಲ ಎಂಬ ಪ್ರಮಾಣಪತ್ರ ಇರಬೇಕು.
ಇದನ್ನೂ ಓದಿರಿ: ರೈತ ಮಹಿಳೆಯರಿಗೆ ಉಚಿತ ನಾಟಿ ಕೋಳಿ (Poultry Scheme) ಮರಿಗಳ ವಿತರಣೆ, ಅರ್ಜಿ ಆಹ್ವಾನ! ಈಗಲೇ ಅರ್ಜಿ ಸಲ್ಲಿಸಿ
ಸಬ್ಸಿಡಿ ಮತ್ತು ಪ್ರತಿ ಜಿಲ್ಲೆಗಳಿಗೆ ನಿರ್ಧರಿಸಿದ ಮೊತ್ತ
- ಗಂಗಾ ಕಲ್ಯಾಣ (Ganga Kalyana) ಯೋಜನೆಯಡಿ ಸಹಾಯಧನ ಪಡೆದುಕೊಳ್ಳಲು ಅರ್ಜಿ ಸಲ್ಲಿಸಿ ಆಯ್ಕೆಯಾದ ಅರ್ಹ ರೈತರಿಗೆ ಕ್ರಿಶ್ಚಿಯನ್ ಸಮುದಾಯ ಅಭಿವೃದ್ಧಿ ನಿಗಮದಿಂದ ಕೊಳವೆ ಬಾವಿಯನ್ನು ಕೊರೆದು, ಪಂಪ್ ಮೋಟಾರ್ ಹಾಗೂ ವಿದ್ಯುದ್ಧೀಕರಣ ಮಾಡಿ ನೀರನ್ನು ಒದಗಿಸಲು ರೂ. 4 ಲಕ್ಷಗಳ ಸಹಾಯಧನವನ್ನು ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ತುಮಕೂರು ಜಿಲ್ಲೆಗಳ ರೈತರಿಗೆ ನೀಡಲಾಗುವುದು.
- ಇತರೆ ಜಿಲ್ಲೆಗಳ ರೈತರಿಗೆ ಈ ಯೋಜನೆಯಡಿ ರೂ.3 ಲಕ್ಷಕ್ಕೆ ಸಬ್ಸಿಡಿ ನೀಡಲಾಗುತ್ತದೆ.
ಗಂಗಾ ಕಲ್ಯಾಣ ಯೋಜನೆಯಡಿ ಅರ್ಜಿ ಸಲ್ಲಿಸುವ ವಿಧಾನ
ಅರ್ಜಿದಾರರು ಅರ್ಜಿ ಸಲ್ಲಿಸಲು ಎರಡು ವಿಧಾನಗಳಿವೆ:
- ನೇರವಾಗಿ ಹತ್ತಿರದ ಗ್ರಾಮ ಒನ್ / ಕರ್ನಾಟಕ ಒನ್ ಕೇಂದ್ರಗಳಿಗೆ ಭೇಟಿ ನೀಡಿ ಅರ್ಜಿ ಸಲ್ಲಿಕೆ.
- ಮೊಬೈಲ್ ಅಥವಾ ಕಂಪ್ಯೂಟರ್ ಮೂಲಕ ಆನ್ಲೈನ್ ಅರ್ಜಿ ಸಲ್ಲಿಕೆ.
ಆನ್ಲೈನ್ ಅರ್ಜಿ ಸಲ್ಲಿಸುವುವದು ಹಂತಗಳು
- ಅಧಿಕೃತ ವೆಬ್ಸೈಟ್ ಪ್ರವೇಶಿಸಿ “Ganga Kalyana Online Application” ಗೆ ಕ್ಲಿಕ್ ಮಾಡಿ.
- “ಗಂಗಾ ಕಲ್ಯಾಣ ಯೋಜನೆ” ನಲ್ಲಿ “ಅರ್ಜಿ ಸಲ್ಲಿಸಿ” ಬಟನ್ ಆಯ್ಕೆಮಾಡಿ.
- ಮೊದಲು ಹೊಸ ಬಳಕೆದಾರರಾಗಿ ನೋಂದಣಿ ಮಾಡಿಕೊಳ್ಳಿ (10 ಅಂಕಿಯ ಮೊಬೈಲ್ ಸಂಖ್ಯೆ ಮೂಲಕ OTP ಪಡೆಯಿರಿ).
- ಬಳಕೆದಾರ ಐಡಿ ಮತ್ತು ಪಾಸ್ವರ್ಡ್ ರಚಿಸಿ ಲಾಗಿನ್ ಆಗಿ.
- ಅರ್ಜಿ ನಮೂನೆಯಲ್ಲಿ ಕೇಳಲಾಗಿರುವ ಎಲ್ಲ ಮಾಹಿತಿಗಳನ್ನು ಭರ್ತಿ ಮಾಡಿರಿ.
- ವಿವರಗಳನ್ನು ಸರಿಯಾಗಿ ಭರ್ತಿ ಮಾಡಿರುವಿರೇ ಎಂದು ಪರೀಕ್ಷಿಸಿ ಮತ್ತು “Submit” ಗೆ ಕ್ಲಿಕ್ ಮಾಡಿ.
ಅಗತ್ಯ ದಾಖಲೆಗಳ ಪಟ್ಟಿ
- ಆಧಾರ್ ಕಾರ್ಡ್
- ವೋಟರ್ ಐಡಿ
- ಪೋಟೋ
- ಬ್ಯಾಂಕ್ ಪಾಸ್ ಬುಕ್
- ಜಾತಿ ಮತ್ತು ಆದಾಯ ಪ್ರಮಾಣಪತ್ರ
- ಸಣ್ಣ/ಅತಿ ಸಣ್ಣ ಹಿಡುವಳಿದಾರ ಪ್ರಮಾಣಪತ್ರ
- ಭೂ-ಕಂದಾಯ ಪಾವತಿ ರಶೀದಿ
- ಜಮೀನು ಪಹಣಿ (RTC)
- ಕೊಳವೆ ಬಾವಿ ಇಲ್ಲ ಎಂಬ ಕಂದಾಯ ಇಲಾಖೆ ಪ್ರಮಾಣಪತ್ರ
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ
15 ಡಿಸೆಂಬರ್ 2025
ಸಹಾಯವಾಣಿ
- ಅರ್ಜಿ ಸಲ್ಲಿಕೆ ಮತ್ತು ಹೆಚ್ಚಿನ ವಿವರಣೆಗಾಗಿ 6360753075 ಕರೆ ಮಾಡಬಹುದು.
ಇದನ್ನೂ ಓದಿರಿ: ಹಿರಿಯ ನಾಗರಿಕರಿಗೆ ಕೇಂದ್ರದಿಂದ ಬಂಪರ್ ಯೋಜನೆ: ಪ್ರತಿ ತಿಂಗಳು ₹10,000 ಪಿಂಚಣಿ
ಗಂಗಾ ಕಲ್ಯಾಣ ಯೋಜನೆಯ ಪರಿಣಾಮಗಳು
ಈ ಯೋಜನೆ ನಿರೀಕ್ಷೆಯಂತೆ ಜಲ ಸಂಪನ್ಮೂಲಗಳನ್ನು ದೊರಕಿಸಿಕೊಡುವ ಮೂಲಕ ಸಣ್ಣ ರೈತರ ಜೀವನ ಮಟ್ಟವನ್ನು ಉನ್ನತಿಗೊಳಿಸುವ ಮತ್ತು ವಿವಿಧ ಬೆಳೆಗಳಿಗೆ ನೀರು ಸಿಗುವ ಗ್ಯಾರಂಟಿ ನೀಡುತ್ತದೆ. ಇದರಿಂದ ಕೃಷಿಕರು ವಿವಿಧ ಋತುಗಳಲ್ಲಿ ಹಲವು ಬೆಳೆಗಳನ್ನು ಬೆಳೆಯಲು ಸಾಧ್ಯವಾಗುತ್ತದೆ. ಆರ್ಥಿಕ ಸ್ವಾವಲಂಬನೆ ಹಾಗೂ ಗ್ರಾಮೀಣ ಭಾಗಗಳ ಅಭಿವೃದ್ಧಿಗೆ ಇದೊಂದು ಮಹತ್ತರ ಹಾದಿಯಾಗಿದೆ.
ಗಂಗಾ ಕಲ್ಯಾಣ (Ganga Kalyana) ಯೋಜನೆಯ ಮೂಲಕ ರೈತರಿಗೆ ಸಹಾಯಮಾಡುವುದು, ಹಸಿರು ಕೃಷಿಯನ್ನು ಅಭಿವೃದ್ಧಿಪಡಿಸುವುದರಿಂದ ಬೆಳೆ ಬೆಳೆಯಲು ಪ್ರೋತ್ಸಾಹ ದೊರೆಯುತ್ತದೆ ಹಾಗೂ ಆರ್ಥಿಕ ಬೆಂಬಲ ದೊರೆಯುವುದರಿಂದ ಕಾಲಾನುಗುಣವಾಗಿ ರೈತರ ಜೀವನದಲ್ಲಿ ಮಹತ್ತರ ಬದಲಾವಣೆಗಳಾಗಲಿದೆ.
ನೀವು ಈ ಯೋಜನೆಗೆ ಅರ್ಜಿ ಸಲ್ಲಿಸುವುದಕ್ಕೆ ಇಚ್ಛಿಸುವಿರಾದರೆ ಈಗಲೇ ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿ ಅಧಿಕೃತ ವೆಬ್ಸೈಟ್ ಮೂಲಕ ಅರ್ಜಿ ಸಲ್ಲಿಸಿ. ನಿಮ್ಮ ಭವಿಷ್ಯಕ್ಕೆ ಹೊಸ ಬೆಳಕು ಮೂಡಿಸಲು ಇದು ಪರಿಪೂರ್ಣ ಅವಕಾಶವಾಗಿದೆ.
ಯಾವುದೇ ಪ್ರಶ್ನೆಗಳಿದ್ದರೆ ಸಹಾಯವಾಣಿ 6360753075ಗೆ ಸಂಪರ್ಕಿಸಿ ಮಾಹಿತಿ ಪಡೆಯಿರಿ.
OBC Gaga Kalyan skim
This is all about fake only for vote bank politics. Jhuta bharavase.